1. ಸುದ್ದಿಗಳು

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಉಳಿದುಕೊಳ್ಳಲು ನಿಷೇಧಿತ ಚುಚ್ಚುಮದ್ದು ಬಳಕೆ, ಗ್ರೂಪಿಸಂ ಸ್ಟಿಂಗ್‌ ಆಪರೇಷನ್‌ನಲ್ಲಿ ಬಹಿರಂಗವಾದ ಸತ್ಯ !

Hitesh
Hitesh
Use of banned injections to stay in Indian cricket team, truth revealed in groupism sting operation!

ಭಾರತೀಯ ಕ್ರಿಕೆಟ್‌ ಆಟಗಾರರು ಹಾಗೂ ಆಡಳಿತ ಮಂಡಳಿಯ ಕುರಿತು  ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಹೇಳಿರುವ ಮಾತುಗಳು ಬಿರುಗಾಳಿಯನ್ನೇ ಸೃಷ್ಟಿ ಮಾಡಿದೆ.

Market Price ತರಕಾರಿ, ಧಾನ್ಯಗಳ ಬುಧವಾರದ ಮಾರುಕಟ್ಟೆ ದರ ವಿವರ ಈ ರೀತಿ ಇದೆ 

ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರ ವಿರುದ್ಧ ಆಂತರಿಕ ತನಿಖೆಗೂ ಬಿಸಿಸಿಐ ಮುಂದಾಗಿದೆ.

ಅಷ್ಟಕ್ಕೂ ಖಾಸಗಿ ವಾಹಿನಿ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ಚೇತನ್‌ ಶರ್ಮಾ ಎನೆಲ್ಲ ಹೇಳಿದರು ಇಲ್ಲಿದೆ ವಿವರ… 

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕ್ರಿಕೆಟ್‌ ಆಟವಾಡಲು ಫಿಟ್ ಇಲ್ಲದಿದ್ದರೂ ಸಹ ಶೇ.100 ಪ್ರತಿಶತ ಫಿಟ್ ಆಗಲು ನಿಷೇಧಿತ ಚುಚ್ಚುಮದ್ದನ್ನು ಆಗ್ಗಾಗೆ ಬಳಸುತ್ತಿದ್ದಾರೆ.

ಕೆಲವರು ನಿರಂತರವಾಗಿ ಬಳಸುತ್ತಿದ್ದು, ಫಿಟ್‌ನೆಸ್‌ ತೋರಿಸಲು ಸಾಧ್ಯವಾಗದೆ ವಿಫಲರಾಗುತ್ತಿದ್ದಾರೆ ಎಂದಿದ್ದಾರೆ.   

ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ: ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ; ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್‌ ವರದಿ 

ಖಾಸಗಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ (ರಹಸ್ಯ ಕಾರ್ಯಾಚರಣೆ)ಶರ್ಮಾ ಈ ರೀತಿಯ ಹಲವು ಅಂಶಗಳನ್ನು ಕಾರ್ಯಾಚರಣೆಯಲ್ಲಿ ಹೇಳಿದ್ದಾರೆ.  

ಕ್ರಿಕೆಟಿಗರು ಬಳಸುವ  ಚುಚ್ಚುಮದ್ದುಗಳಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಇಷ್ಟೇ ಸಲ್ಲ ಅಚ್ಚರಿ ಎಂದರೆ ಕ್ರಿಕೆಟಿಗರು ತೆಗೆದುಕೊಂಡ ಈ ಡ್ರಗ್ಸ್ ಡೋಪಿಂಗ್ ಪರೀಕ್ಷೆಯಲ್ಲೂ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.  

ಜಸ್ಪ್ರೀತ್ ಬುಮ್ರಾ ಅವರು ಸಂಪೂರ್ಣವಾಗಿ ಆಡಲು ಫಿಟ್ ಆಗಿರಲಿಲ್ಲ. ಆದರೆ ಇಂಜೆಕ್ಷನ್ ಸಹಾಯದಿಂದ ಒತ್ತಾಯಪೂರ್ವಕವಾಗಿ ಆಟವಾಡುವಂತೆ ಮಾಡಲಾಗಿದೆ.

ಆದರೆ, ಇದು ಹೆಚ್ಚು ಮುಂದುವರಿದಿಲ್ಲ.

ಇದೀಗ ಅವರು ಆಟವಾಡಲು ಫಿಟ್‌ ಆಗಿಲ್ಲ. ಕಳಪೆ ಪ್ರದರ್ಶನ ತೋರುತ್ತಿರುವ ಕೆಲವು ಆಟಗಾರರು ತಂಡದಲ್ಲಿ ಹಾಗೇ ಉಳಿಯಲು ಚುಚ್ಚುಮದ್ದನ್ನು ಬಳಸುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೇ ಕೆಲವು ಆಟಗಾರರು ಆಟದಿಂದ ವಂಚಿತವಾಗುತ್ತಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.   

ಹೊಸ ದಾಖಲೆ: ಬಾಹ್ಯಾಕಾಶಕ್ಕೆ ಹಾರಿಲಿದ್ದಾರೆ ಅರಬ್‌ನ ಮೊದಲ ಮಹಿಳೆ!  

ಸೌರವ್ ಗಂಗೂಲಿ ಹಾಗೂ ವಿರಾಟ್‌ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ

ಇನ್ನು ಕಳೆದ ಕೆಲವು ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್‌ ವಲಯದಲ್ಲಿ ಹೆಚ್ಚು ಚರ್ಚೆ ಆಗಿದ್ದ ಸೌರವ್ ಗಂಗೂಲಿ ಹಾಗೂ ವಿರಾಟ್‌ ಕೊಹ್ಲಿ ಅವರ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಅವರು ವಿವರಿಸಿದ್ದು, ಇದು ಕ್ರಿಕೆಟ್‌ ಜಗತ್ತನ್ನು ಅಚ್ಚರಿಗೆ ತಳ್ಳಿದೆ.

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ದೊಡ್ಡ ಅಹಂ (Ego) ಘರ್ಷಣೆ ಇತ್ತು. ವಿರಾಟ್ ಅವರು ಮಂಡಳಿಗಿಂತ ದೊಡ್ಡವರು ಎಂದು ಭಾವಿಸಿದ್ದರು ಅಲ್ಲದೇ ಗಂಗೂಲಿ ತಮ್ಮದೇ ಆದ ನಿಲುವಿಗೆ ಬದ್ಧರಾಗಿದ್ದರು ಎಂದಿದ್ದಾರೆ.   

ChatGPT ಕೋಟ್ಯಾಂತರ ಜನರ ಉದ್ಯೋಗಕ್ಕೆ ಕುತ್ತಾಗಲಿದೆಯೇ ChatGPT, BARD ಎಂಬ ಆವಿಷ್ಕಾರಗಳು ?! 

virat kohli

ಸೌರವ್ ಗಂಗೂಲಿ ಅವರ ಕಾರಣದಿಂದ ತಮ್ಮ ನಾಯಕತ್ವ ಸ್ಥಾನ ತಪ್ಪಿತು ಎಂದು ವಿರಾಟ್ ಕೊಹ್ಲಿ ಎಂದು ಭಾವಿಸಿದ್ದಾರೆ.

ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಗಂಗೂಲಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿರಾಟ್ ಕೊಹ್ಲಿ ಸುಳ್ಳುಗಾರ, ಅವರ ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ಮೊದಲೇ ತಿಳಿಸಲಾಗಿತ್ತು. ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಗಂಗೂಲಿ ಹೇಳಿದ್ದರು.

ಆದರೆ ಅಹಂನಿಂದಾಗಿ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗಂಗೂಲಿಯನ್ನು ದೂಷಿಸಿದರು.

ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ತೆಗೆದುಹಾಕುವುದು ಗಂಗೂಲಿಯದ್ದು ಮಾತ್ರ ನಿರ್ಧಾರ ಆಗಿರಲಿಲ್ಲ. ಅದು ಆಯ್ಕೆಗಾರರ ಒಟ್ಟು ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.  

ಕೊಹ್ಲಿ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಬಿಸಿಸಿಐನ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಇಂಚಿಂಚು ಹೇಳಿರುವುದು ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದೆ.   

Bbc ಬಿಬಿಸಿಯ ನವದೆಹಲಿ ಕಚೇರಿಯ ಮೇಲೆ IT ದಾಳಿ! 

bcci

ಮಂಗಳವಾರ ಪ್ರಸಾರವಾದ ಸ್ಟಿಂಗ್ ಆಪರೇಷನ್ ವೊಂದರಲ್ಲಿ ಚೇತನ್ ಶರ್ಮಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ತೆರೆ ಮರೆ ನಡೆಯುವ ಮಾತುಕತೆ ಹಾಗೂ ಕೊಹ್ಲಿ-ಸೌರವ್ ಗಂಗೂಲಿ ನಡುವಿನ ಕೆಲವು ಬೆಚ್ಚಿಬೀಳಿಸುವ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. 

Published On: 15 February 2023, 03:13 PM English Summary: Use of banned injections to stay in Indian cricket team, truth revealed in groupism sting operation!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.