1. ಸುದ್ದಿಗಳು

ವಿವಿಧ ಸೌಲಭ್ಯ, ತರಬೇತಿ ಪಡೆಯಲು ಅರ್ಜಿ ಆಹ್ವಾನ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2021-22ನೇ ಸಾಲಿನ ಜಿಲ್ಲಾ ವಲಯದ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗ ಹಾಗೂ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಗಳ ಅಡಿಯಲ್ಲಿ ಸವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವ ಸಮುದಾಯಕ್ಕೆ ಅನುಕುಲ ಮಾಡಿಕೊಡುವ ಯೋಜನೆ, ವಿವಿಧ ತರಬೇತಿ, ಕುಶಲಕಮಿಇð, ಕಾರ್ಮಿಕರಿಗೆ ಸುಧಾರಿತ ಉಪಕರಣಗಳ ವಿತರಣೆ, ಬಡ್ಡಿ ಸಹಾಯಧನ ಸೇರಿ ವಿವಿಧ ಇಲಾಖೆ, ಕಚೇರಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅವುಗಳ ವಿವರ ಈ ಕೆಳಗಿನಂತಿದೆ.

ಸ್ವಯಂ ಉದ್ಯೋಗ ಸೃಜನಯೋಜನೆ (ಸಾಮಾನ್ಯ):

ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನನಾ ಘಟಕ (ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ.) ಸೇವಾ ವಲಯದ ಘಟಕ (ಗರಿಷ್ಠ ಯೋಜನಾ ವೆಚ್ಚ 5 ಲಕ್ಷ ರೂ.) ಗಳನ್ನು ಪ್ರಾರಂಭಿಸಲು ಹಣಕಾಸು ಸಂಸ್ಥೆ/ಬ್ಯಾAಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ಶೇ.25 (ಗರಿಷ್ಠ 2.50 ಲಕ್ಷ ರೂ.) ಹಾಗೂ ವಿಶೇಷ ವರ್ಗದವರಿಗೆ ಶೇ.35 ರಂತೆ (ಗರಿಷ್ಠ 3.50 ಲಕ್ಷ ರೂ.) ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.

ಸ್ವಯಂ ಉದ್ಯೋಗ ಸೃಜನಯೋಜನೆ (ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ):

ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನೆ ಮತ್ತು ಸೇವಾ ವಲಯ ಘಟಕ (ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ.) ಗಳನ್ನು ಪ್ರಾರಂಭಿಸಲು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಹಣಕಾಸು ಸಂಸ್ಥೆ/ಬ್ಯಾAಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಶೇ.60 ರಂತೆ ಗರಿಷ್ಠ 5.00 ಲಕ್ಷ ರೂ. ಗಳವರೆಗೆ ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.

ವಿವಿಧ ತರಬೇತಿ:

ಕುಶಲಕರ್ಮಿ ತರಬೇತಿ ಸಂಸ್ಥೆ (ಮಲ್ಟಿ ಸ್ಕಿಲ್ ಟ್ರೈನಿಂಗ್ ಸೆಂಟರ್), ಸಾಗರ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರು ಹಾಗೂ ಉದಯೋನ್ಮುಖ ಉದ್ದಿಮೆದಾರರಿಗೆ ಪ್ರಸಕ್ತ ಸಾಲಿನಲ್ಲಿ 3 ತಿಂಗಳ ಅವಧಿಯ ಔದ್ಯಮಿಕ ಹೊಲಿಗೆ ಯಂತ್ರ ನಿರ್ವಾಹಕ (ಇಂಡಸ್ಟಿçಯಲ್ ಸೀವಿಂಗ್ ಮಷಿನ್ ಆಪರೇಟರ್), 3 ತಿಂಗಳ ಅವಧಿಯ ಕಂಪ್ಯೂಟರ್ ಬೇಸಿಕ್ ತರಬೇತಿ, 10 ತಿಂಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗಳು ವಸತಿ/ವಸತಿಯೇತರವಾಗಿದ್ದು, ಉಚಿತವಾಗಿರುತ್ತವೆ.

ಉಚಿತ ಸುಧಾರಿತ ಉಪಕರಣ:

ಪ್ರಸ್ತುತ ಸಾಲಿಗೆ ಗ್ರಾಮೀಣ ಪ್ರದೇಶದ ವೃತ್ತಿಪರ/ವೃತ್ತಿನಿರತ ಬಡಗಿ, ಮೇಸನ್(ಗಾರೆ), ಹೊಲಿಗೆ (ಮಹಿಳೆಯರಿಗೆ) ವೃತ್ತಿಗಳಲ್ಲಿ ತೊಡಗಿರುವವರಿಗೆ ತಲಾ ಗರಿಷ್ಠ 8000 ರೂ. ಮೊತ್ತದ ಸುಧಾರಿತ ಉಪಕರಣಗಳ ಕಿಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

ಬಡ್ಡಿ ಸಹಾಯಧನ:

ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್/ಹಣಕಾಸು ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಪಡೆದು ಸ್ಥಾಪಿಸಲಾಗಿರುವ ಸೂಕ್ಷ್ಮ ಗ್ರಾಮೀಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಅತೀ ಸಣ್ಣ ಕೈಗಾರಿಕೆಗಳು ಮತ್ತು ಕುಶಲಕರ್ಮಿ ವೃತ್ತಿಗಳಲ್ಲಿ ತೊಡಗಿರುವವರಿಗೆ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳು ವಿಧಿಸುವ ಬಡ್ಡಿಗೆ ಸಂಬAಧಿಸಿದAತೆ ಸಹಾಯಧನ ನೀಡಲಾಗುತ್ತಿದೆ. ಅವಧಿ ಸಾಲದ ಬಡ್ಡಿಯ ಮೇಲೆ ಇತರೆ ವರ್ಗದವರಿಗೆ ಶೇ.5 ರಂತೆ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಮಹಿಳೆ, ಅಲ್ಪ ಸಂಖ್ಯಾತರು, ಹಿಂದುಳಿ ವರ್ಗ-1 ಹಾಗೂ 2ಂ, ಅಂಗವಿಕಲರು ಮತ್ತು ಮಾಜಿ ಸೈನಿಕ ಉದ್ದಿಮೆದಾರರಿಗೆ ಶೆ.6ರಂತೆ ಬಡ್ಡಿ ಸಹಾಯಧನವನ್ನು ನೀಡಲು ಅವಕಾಶವಿದೆ. ಜಿಲ್ಲೆಯ ಪ್ರತಿ ಉದ್ದಿಮೆಗೆ ಸೊರಬ ತಾಲೂಕಿಗೆ 6 ವರ್ಷ, ಹೊಸನಗರ ತಾಲೂಕಿಗೆ 5 ವರ್ಷ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ತಾಲೂಕುಗಳಿಗೆ 4 ವರ್ಷದ ಅವಧಿಗಳಿಗೆ ಬಡ್ಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಸಂಬAಧಪಟ್ಟ ಕಚೇರಿಯಿಂದ ಅರ್ಜಿಗಳನ್ನು ಪಡೆದು, ನಿಗಧಿತ ನಮೂನೆಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 30ರ ಒಳಗಾಗಿ (30-06-2021) ಸಂಬAಧಿಸಿದ ಕಚೇರಿಗಳಿಗೆ ಸಲ್ಲಿಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಳಿಗಾಗಿ ದೂರವಾಣಿ ಸಂ: 08182-223376/295689, ಕೈಗಾರಿಕಾ ವಿಸ್ತರಣಾಧಿಕಾರಿಗಳು ಶಿವಮೊಗ್ಗ ಮತ್ತು ಭದ್ರಾವತಿ: 9916565620, ಶಿಕಾರಿಪುರ ಮತ್ತು ಸೊರಬ: 9481743640, ಸಾಗರ: 9448401714, ಹೊಸನಗರ ಮತ್ತು ತೀರ್ಥಹಳ್ಳಿ: 9449948663 ಗಳನ್ನು ಸಂಪರ್ಕಿಸಬಹುದು. ಅಭ್ಯರ್ಥಿಗಳು ಕೆಲಸದ ದಿನಗಳಂದು ಕಚೇರಿಯ ಕೆಲಸದ ಅವಧಿಯಲ್ಲಿ ಮಾತ್ರ ಕರೆ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published On: 16 June 2021, 03:06 PM English Summary: various training and facilities opportunity for youth

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.