1. ಸುದ್ದಿಗಳು

ದಿಢೀರ್‌ ದಿಕ್ಕು ಬದಲಿಸಿದ ಅಸಾನಿ.. ಈ ರಾಜ್ಯದಲ್ಲಿ ರೆಡ್‌ ಅಲರ್ಟ್‌ ಘೋಷಣೆ

Maltesh
Maltesh
Aasani

ಅಸಾನಿ ಚಂಡಮಾರುತವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಆಂಧ್ರ ಪ್ರದೇಶಕ್ಕೆ ಬರುವ ಸಾಧ್ಯತೆಗಳಿವೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹೌದು ಮೊದಲು  ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು, ಅಸಾನಿ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ತಿರುವು ತೆಗೆದುಕೊಳ್ಳುತ್ತದೆ ಎಂದು ಮುನ್ಸೂಚನೆ ನೀಡಿದ್ದರು. ಆದರೆ ಅನಿರೀಕ್ಷಿತವಾಗಿ ಚಂಡಮಾರುತವು ನೆರೆಯ ಆಂಧ್ರ ಪ್ರದೇಶದ ಕಾಕಿನಾಡು ಕರಾವಳಿಯನ್ನು ತಲುಪಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ದಿಕ್ಕು ಬದಲಿಸಿದ ಅಸಾನಿ ಆಂಧ್ರದಲ್ಲಿ ರೆಡ್ ಅಲರ್ಟ್

ಅಸಾನಿ ಚಂಡಮಾರುತವು ಸದ್ಯ ತನ್ನ ದಿಕ್ಕನ್ನು ಬದಲಿಸಿದ್ದು, ಆಂಧ್ರದ ಕಾಕಿನಾಡು ಕರಾವಳಿಯನ್ನು ಮುಟ್ಟಲಿದೆ ಎಂದು ವಿಶಾಖಪಟ್ಟಣ ಚಂಡಮಾರುತ ಎಚ್ಚರಿಕೆ ಕೇಂದ್ರದ ನಿರ್ದೇಶಕಿ ಸುನಂದಾ ಅವರು ತಿಳಿಸಿದ್ದಾರೆ. ಈ ಮಾರುತವು ಕರಾವಳಿಯನ್ನು ಮುಟ್ಟಿದ ನಂತರ ಮತ್ತೆ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಸಮುದ್ರ ತೀರಕ್ಕೆ ಬಂದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ.

ನಿನ್ನೆ ಸಂಜೆಯವರೆಗೆ ಚಂಡಮಾರುತದ ದಿಕ್ಕು ವಾಯವ್ಯ ದಿಕ್ಕಿನ ಕಡೆ ಸಾಗುವ ಲಕ್ಷಣಗಳಿದ್ದವು. ಆದರೆ ಸಂಜೆ ವೇಳೆಗೆ ಇದು ಸಂಪೂರ್ಣ ಬದಲಾಗಿದ್ದು, ಪಶ್ಚಿಮ ಹಾಗೂ ವಾಯವ್ಯ ದಿಕ್ಕೆನೆಡೆ ಸಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಸದ್ಯ ರೆಡ್‌ ಅಲರ್ಟ್‌ ಘೋಷಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ

ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!

ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!

"ಮುಂಬರುವ ಗಂಟೆಗಳಲ್ಲಿ, ಇದು ಪಶ್ಚಿಮ ಹಾಗೂ ವಾಯವ್ಯ  ದಿಕ್ಕಿನಲ್ಲಿ ಮತ್ತು ಬಹುತೇಕ ಆಂಧ್ರಪ್ರದೇಶ ಕರಾವಳಿಯ ಬಳಿ ಚಲಿಸುತ್ತದೆ. ನಾಳೆ ಬೆಳಿಗ್ಗೆ ಅದು ತನ್ನ ದಿಕ್ಕನ್ನು ಬದಲಿಸುತ್ತದೆ ಮತ್ತು ಉತ್ತರ-ಈಶಾನ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಕಾಕಿನಾಡ ಕರಾವಳಿ-ಪೂರ್ವ ಗೋದಾವರಿ ಕರಾವಳಿಯನ್ನು ಮುಟ್ಟುತ್ತದೆ ಮತ್ತು ನಂತರ ಸಮಾನಾಂತರವಾಗಿ ಚಲಿಸುತ್ತದೆ

ಸಿಹಿ ಸುದ್ದಿ: ಪುಣ್ಯಕೋಟಿ ದತ್ತು ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ!

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ಚಂಡಮಾರುತದ ಪರಿಣಾಮದಿಂದಾಗಿ ಕಾಕಿನಾಡ, ಗಣಗವರಂ ಮತ್ತು ಭೀಮುನಿಪಟ್ಟಣ ಬಂದರುಗಳಿಗೆ IMD ಅಪಾಯದ ಸಂಕೇತ ಸಂಖ್ಯೆ 10 ಅನ್ನು ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ ಮತ್ತು ಗುಂಟೂರು ಸೇರಿದಂತೆ ಆಂಧ್ರಪ್ರದೇಶದ ಜಿಲ್ಲೆಗಳಿಗೆ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ರೆಡ್ ವಾರ್ನಿಂಗ್ ಅಲರ್ಟ್ ನೀಡಿದೆ.

ಈ ಮೊದಲು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಅಸಾನಿ ಚಂಡಮಾರುತವು ಭಾನುವಾರ ಸಂಜೆ ತೀವ್ರ ಚಂಡಮಾರುತವಾಗಿ ತೀವ್ರಗೊಂಡಿತ್ತು. ಉತ್ತರ ಆಂಧ್ರಪ್ರದೇಶ-ಒಡಿಶಾ ಕರಾವಳಿಯ ದಿಕ್ಕಿನಲ್ಲಿ ವಾಯುವ್ಯಕ್ಕೆ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಮೊದಲು ತಿಳಿಸಿತ್ತ.

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಆದರೆ  ತೀವ್ರ ಚಂಡಮಾರುತವು ಮಂಗಳವಾರ ಉತ್ತರ ಆಂಧ್ರಪ್ರದೇಶ-ಒಡಿಶಾ ಕರಾವಳಿಯ ಪಶ್ಚಿಮ ಕೇಂದ್ರ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ, ಇದು ಉತ್ತರ-ಈಶಾನ್ಯ ಭಾಗಗಳನ್ನು ಮರುಕಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿತ್ತು. ಇದರ ಭಾಗವಾಗಿ ಮೇ 9 ಮತ್ತು 10 ರಂದು ಆಂಧ್ರ ಮತ್ತು ಓಡಿಶಾದ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿ ಓಡಿಶಾದ 17 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು

Published On: 11 May 2022, 11:15 AM English Summary: Red Alert For Andhra As Cyclone Asani

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.