1. ಸುದ್ದಿಗಳು

ಬರವಣಿಗೆಯಲ್ಲಿ ಆಸಕ್ತಿ ಇದೆಯೇ? ಹಾಗಿದ್ರೆ ನಮ್ಮಲ್ಲಿದೆ ಅವಕಾಶ! ಇಲ್ಲಿದೆ ಪೂರ್ತಿ ವಿವರ

Kalmesh T
Kalmesh T
Interested in writing? Then we have an opportunity for you! Here is the full details

ನಿಮಗೆ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ನಮ್ಮಲ್ಲಿದೆ ನಿಮಗೆ ಸೂಕ್ತ ಅವಕಾಶ. ಕೃಷಿ ಹಾಗೂ ಇತರೆ ವಲಯದ ಆಗು-ಹೋಗುಗಳು, ಸಾಧಕರ ಪರಿಚಯ, ಕೃಷಿಕರಿಗೆ ಅನುಕೂಲವಾಗುವಂತಹ ಮಾಹಿತಿ ಹೀಗೆ ಲೇಖನ ರೂಪದಲ್ಲಿ ಅಥವಾ ವಿಡಿಯೋಗಳ ಮೂಲಕವೂ ಮಾಡಿ ಕಳುಹಿಸಬಹುದು.

ನಿಮ್ಮ ಸುತ್ತ-ಮುತ್ತ ಸಾಕಷ್ಟು ಸಾಧಕರಿದ್ದಾರೆ. ಅವರನ್ನ ಯಾರೂ ಗುರುತಿಸುತ್ತಿಲ್ಲ, ಯಾವ ಮಾಧ್ಯಮಗಳು ಮಾತನಾಡಿಸುತ್ತಿಲ್ಲ ಎಂದು ನಿಮಗೆ ಅನಿಸುತ್ತಿದ್ದರೆ ಇಲ್ಲಿದೆ ಅದಕ್ಕೆ ಪರಿಹಾರ. ನಮ್ಮೊಂದಿಗೆ ಆ ಸಾಧಕರು, ಅಥವಾ ಕೃಷಿಕರ ಮಾಹಿತಿ ಹಂಚಿಕೊಳ್ಳಿ. ಈ ಮೂಲಕ ನೀವೂ ಬರವಣಿಗೆ ಆರಂಭಿಸಿ.

ನೀವೂ ಬರೆಯಬಹುದು…ನಿರೂಪಕರೂ ಆಗಬಹುದು..!

ಕೃಷಿ ಮಾಧ್ಯಮವಾಗಿ ಕಳೆದ 26 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ “ಕೃಷಿ ಜಾಗರಣ ಸಂಸ್ಥೆ” ದೇಶದ 12 ಪ್ರಾದೇಶಿಕ ಭಾಷೆಗಳಲ್ಲಿ ಹಾಗೂ ಹಿಂದಿ, ಇಂಗ್ಲೀಷ್‌ ಸೇರಿದಂತೆ 30 ರಾಜ್ಯಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಮ್ಯಾಗಜಿನ್‌, ವೆಬ್‌ ಪೋರ್ಟಲ್‌, ಯೂಟ್ಯೂಬ್‌ ಚಾನಲ್‌ ಹಾಗೂ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.

ಕೃಷಿ, ತೋಟಗಾರಿಕೆ, ಪಶುಪಾಲನೆ, ಹೈನುಗಾರಿಕೆ, ಸರ್ಕಾರಿ ಯೋಜನೆಗಳು, ಯಶೋಗಾಥೆಗಳು, ಸಂಶೋಧನಾತ್ಮಕ ಬರಹಗಳು, ಹೊಸ ಹೊಸ ಪ್ರಯೋಗಗಳು, ಕೆವಿಕೆ-ಕೃಷಿವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳಿಂದ ಉತ್ತಮ ಲೇಖನಗಳನ್ನು ಜನಸಾಮಾನ್ಯರವರೆಗೆ ತಲುಪಿಸುವ ಕಾರ್ಯ ಕೂಡ ಮಾಡುತ್ತಿದೆ.

ನೀವೂ ಸಹ ರೈತರಿಗೆ ಉಪಯುಕ್ತ ಎನಿಸುವ, ಯಶಸ್ವಿ ರೈತರ ಕುರಿತಾದ ಲೇಖನಗಳನ್ನು ನಮ್ಮ ವೆಬ್‌ಪೋರ್ಟಲ್‌ಗೆ, ಮ್ಯಾಗಜಿನ್‌ಗೆ ಕಳುಹಿಸಬಹುದು.

ಅಲ್ಲದೇ ನೀವೆ ನಿರೂಪಕರಾಗಿ ಕೃಷಿ ಕುರಿತಾದ ಮಾಹಿತಿ, ವಿಶೇಷತೆ, ರೈತರನ್ನ ಸಂದರ್ಶನ ಮಾಡಿದ ವಿಡಿಯೋಗಳನ್ನು ಕೂಡ ಕಳುಹಿಸಿಕೊಡಬಹುದು. ನಿಮ್ಮ ಕ್ರೀಯಾಶೀಲತೆಗೆ ನಮ್ಮಲ್ಲಿದೆ ವೇದಿಕೆ.

ಆಸಕ್ತರಿದ್ದು, ಬರೆಯುವ ಹಂಬಲ ಇದ್ದವರು ಸಂಪರ್ಕಿಸಿ:

Mail Id: kannada@krishijagran.com

Contact No: 98188 65249 

Published On: 09 August 2023, 11:47 AM English Summary: Interested in writing? Then we have an opportunity for you! Here is the full details

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.