1. ಸುದ್ದಿಗಳು

ಆಗಸ್ಟ್‌ 5 ರಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ..ಫ್ಲವರ್‌ನಲ್ಲಿ ಮಿಂಚಲಿದ್ದಾರೆ ಪವರ್‌ಸ್ಟಾರ್‌

Maltesh
Maltesh
Bengaluru lalabagh flower show on august 5 to 15 in the memory of Puneethr ajkumar

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದವ ಬೆಂಗಳೂರಿನ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭಗೊಳ್ಳಲಿದೆ. ಹೌದು ಕೋವಿಡ್‌ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಈ ಫ್ಲವರ್ ಶೋವನ್ನು ಇದೇ ಆಗಸ್ಟ್‌ 5ರಿಂದ ಆರಂಭಿಸಲಾಗುವುದು ಹಾಗೂ ಕೋವಿಡ್ ನಿಯಮಾವಳಿಗಳು ಸಡಿಲವಾಗಿರುವ ಕಾರಣದಿಂದ ಪ್ರತಿ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. 

ನಗರದ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ  ಆಯೋಜಿಸುವ ಫ್ಲವರ್‌ ಶೋ ಅನ್ನು ಸ್ಯಾಂಡಲ್‌ವುಡ್‌ನ ದಿವಗಂತ ನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಆಗಸ್ಟ್ 5 ಕ್ಕೆ ಉದ್ಘಾಟಿಸಲಿದ್ದು, ಆಗಸ್ಟ್‌ 15ರವರೆಗೆ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ಶೋ ನಡೆಯಲಿದೆ.

ಕಳೆದ 2 ವರ್ಷಗಳಿಂದ ಕೋವಿಡ್‌ ಕಾರಣದಿಂದಾಗಿ ಪುಷ್ಪ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ತೋಟಗಾರಿಕೆ ಇಲಾಖೆಯು ಮೈಸೂರು ತೋಟಗಾರಿಕಾ ಸೊಸೈಟಿಯೊಂದಿಗೆ  ಎರಡು ಬಾರಿ ಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ.

ಈ ಬಾರಿಯ ಫ್ಲವರ್‌ ಶೋ ವಿಶೇಷತೆ ಏನು..?

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಾಗೂ  ಅವರ ಗಾಜನೂರಿನ ಮನೆ ವಿಶೇಷವಾಗಿದೆ ಎಂದು ಮಾಹಿತಿ ದೊರೆತಿದೆ..

ಟಿಕೆಟ್ ದರದಲ್ಲಿ ಸಿಗುತ್ತಾ ರೀಯಾಯಿತಿ..?

ಇನ್ನು ಈ ಬಾರಿಯ ಫ್ಲವರ್‌ ಶೋಗೆ ಟಿಕೆಟ್‌ನಲ್ಲಿ ಡಿಸ್ಕೌಂಟ್‌ ನೀಡುವ ಕುರಿತು ಇನ್ನೇರಡು ದಿನಗಳಲಲ್ಲಿ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ಶಾಲಾ ಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಅಂದ್ರೆ ಸ್ವಲ್ಪ ಹೆಚ್ಚು ಇಷ್ಟ ಪಡುತ್ತಾರೆ.

ಈ ಕಾರಣದಿಂದಾಗಿ ಚಿಕ್ಕ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವ ಬಗ್ಗೆ ಕೂಡ ಚಿಂತನೆ ಮಾಡಿ ನಿರ್ಧಾರಕ್ಕೆ ಬರಲಾಗುವುದು. ಈ ವಿಷಯದ ಕುರಿತು  ಕೂಡಾ ಎರಡ್ಮೂರು  ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಮುನಿರತ್ನ ಹೇಳಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಿಂದಲೂ ಹೂವುಗಳು ಬರುತ್ತಿದ್ದು ಈ ಭಾರಿ ಪ್ರಮುಖ ಆಕರ್ಷಣೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ರಾಜ್ಯದಲ್ಲಿ ಮಹಾಮಳೆ ಉಂಟು ಮಾಡಿರುವ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆಯಲ್ಲಿ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ವರದಿ ತಯಾರಿಸುತ್ತಿದ್ದಾರೆ. ಆ ವರದಿ ಬಂದ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಸರ್ಕಾರದ ವತಿಯಿಂದ ಮಾಡುತ್ತೇವೆ. ಮತ್ತು ಪ್ರಾಮಾಣಿಕವಾಗಿ ನಾವು ರೈತರ ಜತೆಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿರಿ: ರೈತರಿಗೆ ಬಂಪರ್‌ ಸುದ್ದಿ: ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?

Published On: 17 July 2022, 12:20 PM English Summary: Bengaluru lalabagh flower show on august 5 to 15 in the memory of Puneethr ajkumar

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.