1. ಸುದ್ದಿಗಳು

ಜುಲೈ 1ರಿಂದ 63 ದಿನಗಳ ಅಮರನಾಥ ಯಾತ್ರೆ ಆರಂಭ.

Maltesh
Maltesh
Amarnath Yatra begins from July 1.

1.. ಆರ್ಥಿಕ ಬಿಕ್ಕಟ್ಟು: ಚೀನಾಕ್ಕೆ  ಒಂದು ಲಕ್ಷ ಕೋತಿಗಳನ್ನು ರಫ್ತು ಮಾಡಲು ಸಿದ್ಧವಾದ ಶ್ರೀಲಂಕಾ

2.. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ;  ಕರ್ನಾಟಕದಲ್ಲಿ ೧೫೦ ಕೋಟಿ ರೂಪಾಯಿ ನಗದು ವಶ

3.. ಜುಲೈ 1ರಿಂದ 63 ದಿನಗಳ ಅಮರನಾಥ ಯಾತ್ರೆ ಆರಂಭ.

4.. ದಂಡ ರಹಿತ ಆಸ್ತಿ ತೆರಿಗೆ ಪಾವತಿಗೆ ಜೂ.30 ಡೆಡ್‌ಲೈನ್‌

5.. ಇಂದಿನ ಹವಾಮಾನ ವರದಿ: ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

6.. ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಇತರೆ ಭತ್ಯೆಗಳಲ್ಲೂ ಹೆಚ್ಚಳ ಸಾಧ್ಯತೆ

7 ಹಿಮಾಚಲ ಪ್ರದೇಶ್‌ ದಿವಸ್‌:  ಬಿಲಾಸ್‌ಪುರದಲ್ಲಿ ತೋಟಗಾರಿಕಾ ಸಚಿವ ಜಗತ್ ಸಿಂಗ್ ನೇಗಿ  ಧ್ವಜಾರೋಹಣ 

1..ಶ್ರೀಲಂಕಾದಿಂದ ಚೀನಾಕ್ಕೆ ಒಂದು ಲಕ್ಷ ಕೋತಿಗಳನ್ನು ಕಳುಹಿಸಲಾಗುತ್ತಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ. ಇದನ್ನು ಶ್ರೀಲಂಕಾದ ಕೃಷಿ ಸಚಿವ ಮಹಿಂದಾ ಅಮರವೀರಾ ಶುಕ್ರವಾರ ಬಹಿರಂಗಪಡಿಸಿದ್ದಾರೆ. ಶ್ರೀಲಂಕಾ ಚೀನಾಕ್ಕೆ ಒಂದು ಲಕ್ಷ ಮಂಗಗಳನ್ನು ರಫ್ತು ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದರು. ಗಮನಾರ್ಹವಾಗಿ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಅವಧಿಯಿಂದ ಚೇತರಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಮಂಗಗಳನ್ನೂ ರಫ್ತು ಮಾಡಲು ಸಿದ್ಧವಾಗಿದೆ. . ಚೀನಾವೇ ಒಂದು ಲಕ್ಷ ಕೋತಿಗಳಿಗೆ ಬೇಡಿಕೆ ಇಟ್ಟಿದೆ. ಕೋತಿಗಳ ಬೇಡಿಕೆಗೆ ಸಂಬಂಧಿಸಿದಂತೆ ಚೀನಾದೊಂದಿಗೆ ಮೂರು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದಿದ್ದಾರೆ.

ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಈ ಭತ್ಯೆಗಳಲ್ಲೂ ಹೆಚ್ಚಳ: ಈ ಭರ್ಜರಿ ಹೆಚ್ಚಳ ಯಾರಿಗೆ ಎಷ್ಟು ಗೊತ್ತೆ?

2..ಕರ್ನಾಟಕದಲ್ಲಿ ಮಾರ್ಚ್ 29 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಜಾರಿ ಘಟಕಗಳಿಂದ ಸುಮಾರು 150 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 61 ಕೋಟಿ ರೂಪಾಯಿ ನಗದು, 33 ಕೋಟಿ ರೂಪಾಯಿ ಮೌಲ್ಯದ ಮದ್ಯ, 24 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಲೋಹಗಳು ಮತ್ತು 18 ಕೋಟಿ ರೂಪಾಯಿ ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಮಾದಕವಸ್ತುಗಳ ಮೌಲ್ಯ ಸುಮಾರು 13 ಕೋಟಿ ರೂಪಾಯಿ ಇದ್ದು, ಅಧಿಕಾರಿಗಳು 1262 ಎಫ್‌ಐಆರ್ ಗಳನ್ನು ದಾಖಲಿಸಿದ್ದಾರೆ. ಮಾರ್ಚ್ 9 ಮತ್ತು 27 ರ ನಡುವೆ 58 ಕೋಟಿ ಮೌಲ್ಯದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

3..ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಅಮರನಾಥ ಯಾತ್ರೆ ಈ ವರ್ಷದ ಜುಲೈ 1 ರಂದು ಪ್ರಾರಂಭವಾಗಲಿದ್ದು, ಇದು 2023ರ ಆಗಸ್ಟ್31 ರಂದು ಕೊನೆಗೊಳ್ಳಲಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳಿಂದ ಏಕಕಾಲದಲ್ಲಿ ಯಾತ್ರೆ ಪ್ರಾರಂಭವಾಗಲಿದೆ. ಪವಿತ್ರ ವಾರ್ಷಿಕ ಯಾತ್ರೆಗೆ ಆನ್ ಲೈನ್ ಮತ್ತು ಆಫ್ ಲೈನ್ ವಿಧಾನಗಳ ಮೂಲಕ ನೋಂದಣಿ ಪ್ರಕ್ರಿಯೆಯು ಇದೇ 17 ರಿಂದ ಪ್ರಾರಂಭವಾಗಲಿದೆ. ಪವಿತ್ರ ತೀರ್ಥಯಾತ್ರೆ ಮತ್ತು ನೋಂದಣಿಯ ದಿನಾಂಕಗಳನ್ನು ನಿನ್ನೆ ಘೋಷಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸುಗಮ ಮತ್ತು ತೊಂದರೆರಹಿತ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಬದ್ಧವಾಗಿದೆ ಎಂದು ಹೇಳಿದ್ದಾರೆ.

4..ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿಯಲ್ಲಿ ಆಸ್ತಿ ಮಾಲೀಕರು ಸಕಾಲದಲ್ಲಿ ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ವಲಯ 3ರ ವಲಯ ಅಧಿಕಾರಿ ಅಬ್ದುಲ್ ರೆಹಮಾನ್ ಅವರು ತಿಳಿಸಿದ್ದಾರೆ. 2023-24ನೇ ಸಾಲಿನ ಎಸ್.ಎ.ಎಸ್.ನಲ್ಲಿ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ಮತ್ತು ಅದಕ್ಕೂ ಮೊದಲು ಪಾವತಿಸಿದಲ್ಲಿ ತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ದಂಡವಿಲ್ಲದೇ ಪಾವತಿಸಲು ಜೂನ್ 30 ರವರೆಗೆ ಅವಕಾಶ ನೀಡಲಾಗಿದೆ. ಜುಲೈ 1 ರಿಂದ ಆಸ್ತಿ ತೆರಿಗೆ ಪಾವತಿಸುವುದಾದರೆ ಶೇ.2 ದರದಲ್ಲಿ ಪ್ರತಿ ತಿಂಗಳು ಸಂದಾಯ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Breaking News: ಡೈರಿ ಸ್ಪೋಟದಿಂದ 18 ಸಾವಿರ ಹಸುಗಳ ಸಾವು! ಎಲ್ಲಿ ಗೊತ್ತಾ?

5..ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ. ಬೀದರ್‌ನಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ರಾಜ್ಯದಲ್ಲಿ ಅತೀ ಗರಿಷ್ಟ ಉಷ್ಣಾಂಶ 41.5 ಡಿಗ್ರಿ ಸೆಲ್ಸಿಯಸ್ ಕಲಬುರ್ಗಿಯಲ್ಲಿ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಹಲವು ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶವಿದ್ದು, ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

6..ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಜುಲೈ 2023 ರಲ್ಲಿ, ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಇದಲ್ಲದೇ ಪ್ರಯಾಣ ಭತ್ಯೆ (TA) ಕೂಡಾ ಹೆಚ್ಚಾಗುವ ನಿರೀಕ್ಷೆಯಿದೆ. ಈ ಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡಲಾಗುವುದು. ಅಂದರೆ  3 ತಿಂಗಳ ಡಿಎ ಬಾಕಿಯೊಂದಿಗೆ ವೇತನ ನೀಡಲಾಗುವುದು.ಇದರೊಂದಿಗೆ ಜುಲೈ 2023ರ ನಂತರ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ  ಗಣನೀಯ ಏರಿಕೆ ಕಂಡು ಬರಲಿದೆ ಎನ್ನುವುದು ಸ್ಪಷ್ಟ. ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ.

Published On: 15 April 2023, 04:40 PM English Summary: Amarnath Yatra begins from July 1.

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.