1. ಪಶುಸಂಗೋಪನೆ

ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಉಚಿತ ಕರುಳು ಬೇನೆ ಲಸಿಕೆ ಆರಂಭ

goat

ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದರಿಂದ ಜಾನುವಾರುಗಳಿಗೆ ವಿವಿಧ ರೋಗಗಳು ಬರುವ ಸಾಧ್ಯತೆಯಿದೆ. ಆಡು, ಕುರಿಗಳಿಗೆ ಕರುಳು ಬೇನೆ ರೋಗ ಬರಬಾರದೆಂದು ಕೊಪ್ಪಳ  ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಉಚಿತ ಕರಳು ಬೇನೆ ಲಸಿಕಾ ಕಾರ್ಯಕ್ರಮವನ್ನು ಜೂನ್ 5 ರಿಂದ ಆರಂಭಿಸಲಾಗಿದೆ.

ಕರಳು ಬೇನೆ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿಯಂತೆ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಮೊದಲನೇ ಸುತ್ತಿನ ಲಿಸಕೆ ಕಾರ್ಯಕ್ರಮವು ಜೂನ್ ಮಾಹೆಯಲ್ಲಿ ಕಾರ್ಯಾರಂಭಗೊAಡಿದ್ದು, ಎರಡನೇ ಸುತ್ತಿನ ಲಸಿಕೆ ಕಾರ್ಯಕ್ರಮವು ಡಿಸೆಂಬರ್-2021 ನೇ ಮಾಹೆಯಲ್ಲಿ ಜರುಗಲಿದೆ. ಪ್ರಯುಕ್ತ 2021-22ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಕುರಿ-ಮೇಕೆಗಳಿಗೆ ಒಂದನೇ ಸುತ್ತಿನ ಕರಳು ಬೇನೆ (ಇ.ಟಿ) ಲಸಿಕೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಉಚಿತವಾಗಿ ಹಾಕಲಾಗುತ್ತಿದೆ.

ಕರಳು ಬೇನೆ ರೋಗವು ಸಾಮಾನ್ಯವಾಗಿ ಕುರಿ-ಮೇಕೆಗಳಲ್ಲಿ ಕಂಡುಬರುತ್ತದೆ. ಈ ರೋಗವು ಕ್ಲಾಸ್ಟಾçಡಿಯಂ ಪರ್‌ಫ್ರುಂಜೇನ್ಸ್ ಎಂಬ ನಂಜುಕಾರಕ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದರಿಂದ ಕುರಿ ಮಂಕಾಗುವಿಕೆ, ಮೇವಿನತ್ತ ನಿರಾಸಕ್ತಿ, ಭೇದಿ, ಸುತ್ತಿ-ಸುತ್ತಿ ಬಿದ್ದು ಹಠಾತ ಸಾವನ್ನಪ್ಪುವುದು. ರೋಗಾಣು ಕುರಿ-ಮೇಕೆಗಳ ಕರುಳಿನಲ್ಲಿ ವೃದ್ಧಿ ಹೊಂದಿ ವಿಷ ವಸ್ತುವನ್ನು ಉತ್ಪಾದಿಸಿ ನಂಜು ಉಂಟು ಮಾಡುತ್ತದೆ.

 ರೋಗ ಕಾಣಿಸಿಕೊಂಡಲ್ಲಿ ಕುರಿ-ಮೇಕೆ ಮರಿಗಳಲ್ಲಿ ಹೆಚ್ಚಿನ ಸಾವಿನ ಪ್ರಮಾಣ ಕಂಡುಬರುತ್ತದೆ. ಆದ್ದರಿಂದ, ಜಿಲ್ಲೆಯ ಎಲ್ಲಾ ಕುರಿ-ಮೇಕೆ ಸಾಕಾಣಿಕೆದಾರ ಹಾಗೂ ರೈತರ ಕುರಿ-ಮೇಕೆಗಳಿಗೆ ಕರಳು ಬೇನೆ ಲಸಿಕೆಯನ್ನು ಹಾಕಿಸಿ, ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರು(ಆಡಳಿತ) ಡಾ.ಹೆಚ್.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Published On: 07 June 2021, 08:39 PM English Summary: Free disease vaccine for sheep goats

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.