1. ಅಗ್ರಿಪಿಡಿಯಾ

ಮಣ್ಣಿನ ಬಗ್ಗೆ ರೈತರು ತಿಳಿಯಬೇಕಾದ ಅವಶ್ಯಕ ಅಂಶಗಳು

Organic soil

ಮಣ್ಣಿನ ಫಲವತ್ತತೆ ಅದರ ಭೌತಿಕ ರಚನೆ,ಅದರಲ್ಲಿರುವ ರಾಸಾಯನಿಕ ಗುಣಧರ್ಮ ಮತ್ತು ಸೂಕ್ಷ್ಮಾಣು ಮತ್ತು ಇತರ ಜೀವಾಂಶಗಳ ಮೇಲೆ ನಿರ್ಧರಿಸುತ್ತದೆ.ಇದರಲ್ಲಿ ಯಾವುದಾದರೂ ಒಂದು ಅಂಶ ಕೂಡ ಕಡಿಮೆಯಾದರೂ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

*ಮಣ್ಣಿನಲ್ಲಿರುವ ಖನಿಜ ರೂಪದ ಪೋಷಕಾಂಶಕ್ಕಾಗಿ ಸಾವಯವ ವಸ್ತುಗಳು ಅವಶ್ಯವೇ...?*

ಖನಿಜ ರೂಪದ ಪೋಷಕಾಂಶಗಳು ಸಸ್ಯಗಳಿಗೆ ತಲುಪಬೇಕಾದರೆ ರಾಸಾಯನಿಕ ಕ್ರಿಯೆ ಅತ್ಯಗತ್ಯ. ಮಣ್ಣಿನಲ್ಲಿರುವ ಮೂಲ ಖನಿಜಗಳು ಮತ್ತು ಸಾವಯವ ಪದಾರ್ಥ ಸೇರಿಕೊಂಡು ರಾಸಾಯನಿಕ ಕ್ರಿಯೆಗೆ ಒಳಪಟ್ಟು  ಸಂಯುಕ್ತ ವಸ್ತುಗಳು ತಯಾರಾಗುತ್ತವೆ. ಇದರಿಂದ ಮಣ್ಣಿನ ಬಣ್ಣ ಮತ್ತು ಫಲವತ್ತತೆ ನಿರ್ಧರಿಸಲ್ಪಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸೂಕ್ಷ್ಮಾಣು ಜೀವ ಸಮೂಹ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

*ಮಣ್ಣಿನ ಫಲವತ್ತತೆಯಲ್ಲಿ ಸಾವಯವ ವಸ್ತುವಿನ ಪಾತ್ರ*

>ಸಾವಯವ ವಸ್ತು ಸಸ್ಯಗಳಿಗೆ ಪೋಷಕಾಂಶ ದೊರೆಯುವಲ್ಲಿ ಪಾತ್ರವಹಿಸುತ್ತದೆ.

>ಸಾವಯವ ವಸ್ತು ಸೂಕ್ಷ್ಮಾಣುಗಳಿಂದ ಕೊಳೆತು ಅದರಲ್ಲಿರುವ ಪೋಷಕಾಂಶಗಳು ಸಸ್ಯಗಳಿಗೆ ದೊರೆಯಲು ಸಹಾಯ ಮಾಡುತ್ತದೆ.

>ಸಾವಯವ ವಸ್ತುಗಳು ಮಣ್ಣಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆ ಹೆಚ್ಚಾಗಲು ಕಾರಣವಾಗುತ್ತದೆ.

>ಕೊಳೆತ ಸಾವಯವದಿಂದ ಮಣ್ಣಿನಲ್ಲಿ ಹ್ಯೂಮಸ್ ಪ್ರಮಾಣ ಹೆಚ್ಚಾಗಿ ಮಣ್ಣು ಕಠಿಣವಾಗಿ ಗಟ್ಟಿಯಾಗುತ್ತದೆ.ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಅನುಕೂಲವಾಗುತ್ತದೆ ಹಾಗೂ ಮಣ್ಣು ಕೊರೆಯುವಿಕೆ ಕಡಿಮೆಯಾಗುತ್ತದೆ.

>ಸಾವಯವ ಪದಾರ್ಥ ಹಾಗೂ ಸೂಕ್ಷ್ಮಾಣುಗಳು ಸಸ್ಯಗಳಿಗೆ ರೋಗಭಾದೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತವೆ.

>ಸಾವಯವ ವಸ್ತು ಮಣ್ಣಿನಲ್ಲಿ ಹೆಚ್ಚಿನ ನೀರು ಬಸಿಯಲುಸಹಾಯಕಾರಿ.

>ಕೊಳೆತ ಸಾವಯವ ವಸ್ತು ಬೆಳೆಗೆ ಸೂಕ್ತವಾದ ಮಣ್ಣಿನ ರಸಸಾರವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ

*ಮಣ್ಣಿನಲ್ಲಿ ಯಾವ ರೀತಿ ಸಾವಯವ ವಸ್ತುವನ್ನು ಹೆಚ್ಚಿಸಬಹುದು*

ಮಣ್ಣಿನಲ್ಲಿ ಸಾವಯವ ವಸ್ತು ಶೇ.2-10 ಮತ್ತು ಶೇ.90-98ರಷ್ಟು ಇತರ ಖನಿಜಾಂಶಗಳಿಂದ ಕೂಡಿರುತ್ತದೆ. ಆದರೆ ಈಗಿನ ಕೃಷಿಯುಗದಲ್ಲಿ ಸಾವಯವ ಪ್ರಮಾಣ ಇನ್ನಷ್ಟು ಕಡಿಮೆಯಾಗಿದೆ. ಸಾವಯವ ವಸ್ತುವಿನ ಒಟ್ಟು ಪ್ರಮಾಣದ ಶೇ.60 ಇಂಗಾಲ ಇರುತ್ತದೆ. ಶೇ.40 ರಷ್ಟು ಇತರ ಲವಣಾಂಶಗಳಿರುತ್ತವೆ. ಶೇ.1-2 ಇಂಗಾಲ ಹೊಂದಿದ ಮಣ್ಣು ಫಲವತ್ತಾಗಿದ್ದು, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ವಿವಿಧ ಮೂಲಗಳಿಂದ ದೊರೆಯುವ ಕಾಂಪೋಸ್ಟ್ ಹಾಗೂ ವಿವಿಧ ಪ್ರಾಣಿಗಳಿಂದ ಬರುವ ಗೊಬ್ಬರ, ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಸಾವಯವ ವಸ್ತುವನ್ನು ಹೆಚ್ಚಿಸಲು ಸಾಧ್ಯ.

*ಕೃಷಿಗೆ ನಿಜವಾದ ಆಧಾರಸ್ತಂಭವೇ ಸಾವಯವ ವಸ್ತು*

ಅಗತ್ಯ ಪ್ರಮಾಣದ ಸಾವಯವ ಗೊಬ್ಬರ ಮಣ್ಣಿಗೆ ಪೊರೈಕೆಯಾದಾಗ ಫಲವತ್ತತೆ ಉಳಿದು ಉತ್ತಮ ಇಳುವರಿ  ಪಡೆಯಬಹುದು.ಆಧುನಿಕ ಕೃಷಿಯಲ್ಲಿ ಹೆಚ್ಚು ಸಾವಯವ ಗೊಬ್ಬರ ಬಳಸುವವರು, ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವವರಿಗಿಂತ ಉತ್ತಮ ಇಳುವರಿಯನ್ನು ಪಡಯುತ್ತಿದ್ದಾರೆ.

ಲೇಖನ: ಯೋಗೇಂದ್ರ ಜಾಯಗೊಂಡೆ

Published On: 18 January 2021, 10:13 AM English Summary: Important role of organic manures in soil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.